ಭಾಗ್ಯೋದಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಎ. ದೇವರಾಜ್ ನಿರ್ಮಿಸಿರುವ ಮಹಾಶರಣ ಹರಳಯ್ಯ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹನ್ನೆರಡನೇ ಶತಮಾನದಲ್ಲಿಯೇ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಕ್ರಾಂತಿಪುರುಷ ಬಸವಣ್ಣನವರ ಅನುಯಾಯಿಗಳಲ್ಲಿ ಒಬ್ಬರಾದ ಹರಳಯ್ಯನವರ ಕಥೆ ಆಧಾರಿತ ಚಿತ್ರ.
ಬಿ.ಎ.ಪುರಷೋತ್ತಮ್ (ಓಂಕಾರ್) ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಛಾಯಾಗ್ರಹಣ, ಜಿಮ್ಮಿರಾಜ್ ಸಂಗೀತ, ಹೈಟ್ಮಂಜು ನೃತ್ಯ, ಎಸ್. ಕುಮಾರ್ ಸಂಕಲನ, ಓಂಕಾರ್ ಸಾಹಿತ್ಯ, ಇಸ್ಮಾಯಿಲ್ ಕಲಾನಿರ್ದೇಶನ, ಕೆ.ವಿ.ರವಿಚಂದ್ರ, ರಾಮಕೃಷ್ಣ, ರಮೇಶ್ಭಟ್, ರಾಜು(ಡಿಂಗ್ರಿ), ವಿಕ್ರಂ ಉದಯ್ಕುಮಾರ್, ಜಯಲಕ್ಷ್ಮಿ, ಶೀಲಾ, ಸುಮಿತ್ರ ಅಭಿನಯಿಸಿದ್ದಾರೆ.